Saturday, 10 March 2018

ಮಾರ್ಚ್ 8ರ 'ವಿಶ್ವ ಮಹಿಳಾ ದಿನಾಚರಣೆ' ಪ್ರಯುಕ್ತ ಮಹಿಳೆಯರಿಗಾಗಿಯೇ ಏರ್ಪಡಿಸಲಾದ ಕ್ವಿಜ್'ಗೆ ಕೊಟ್ಟಿದ್ಧ 35 ಪ್ರಶ್ನೆಗಳ ಉತ್ತರ ಸಂಕೇತಗಳು..

ಮಾರ್ಚ್ 8ರ 'ವಿಶ್ವ ಮಹಿಳಾ ದಿನಾಚರಣೆ' ಪ್ರಯುಕ್ತ ಮಹಿಳೆಯರಿಗಾಗಿಯೇ ಏರ್ಪಡಿಸಲಾದ ಕ್ವಿಜ್'ಗೆ ಕೊಟ್ಟಿದ್ಧ 35 ಪ್ರಶ್ನೆಗಳ ಉತ್ತರ ಸಂಕೇತಗಳು..

1. ಭಾರತದ ಅತ್ಯುನ್ನತ 'ಜ್ಞಾನಪೀಠ ಪ್ರಶಸ್ತಿ'ಯನ್ನು ಈವರೆಗೆ ಎಷ್ಟು ಜನ ಮಹಿಳೆಯರು ಪಡೆದಿದ್ದಾರೆ?

A. 5
B. 6
C. 7●
D. 8

2.  ಅನಾ ಅಹ್ಮತೋವಾ ರಷ್ಯದ ಹೆಸರಾಂತ ಕವಯಿತ್ರಿ. ಆಕೆಯ ಹೆಸರನ್ನು ಕೆಳಕಂಡ ಯಾವುದಕ್ಕೆ ಇಡಲಾಗಿದೆ?

A. ಒಂದು ನೌಕೆಗೆ
B. ಒಂದು ಗ್ರಹಕ್ಕೆ●
C. ಒಂದು ಅಣುಸ್ಥಾವರಕ್ಕೆ
D. ಒಂದು ವಿಮಾನ ನಿಲ್ದಾಣಕ್ಕೆ

3. ಭಾರತದಲ್ಲಿ ಪ್ರಥಮ ಬಾರಿಗೆ ಮಹಿಳೆಯರಲ್ಲಿ ಯಾವ ಭಾಷೆಯ ಲೇಖಕಿ ಜ್ಞಾನಪೀಠ ಪ್ರಶಸ್ತಿ ಪಡೆದುಕೊಂಡರು?

A. ಒಡಿಯಾ
B. ಹಿಂದಿ
C. ಬಂಗಾಳಿ●
D. ಅಸ್ಸಾಮಿ

4. ದೊಂಡೊ ಕೇಶವ ಕಾರ್ವೆಯವರು ಶ್ರೀಮತಿ ನಾತಿಬಾಯಿ ದಾಮೋದರ್ ಠಾಕರೆ (SNDT) ಹೆಸರಿನಲ್ಲಿ ಯಾವ ವರ್ಷ ಪ್ರಥಮ ಮಹಿಳಾ ವಿ. ವಿ. ಯನ್ನು ಆರಂಭಿಸಿದ್ದರು?

A. 1910
B. 1914
C. 1916●
D. 1918

5. ದೇಶದ ಮೊದಲ ಮಹಿಳಾ ಸಚಿವೆಯಾದ ಖ್ಯಾತಿ ಯಾರಿಗೆ ಸಲ್ಲುತ್ತದೆ?

A. ಸರೋಜಿನಿ ನಾಯ್ಡು
B. ಸುಚೇತಾ ಕೃಪಲಾನಿ
C. ಆನಿ ಬೆಸೆಂಟ್
D. ರಾಜಕುಮಾರಿ ಅಮೃತ್'ಕೌರ್●

6. ದೇಶದ ಮೊದಲ ಮಹಿಳಾ ಮುಖ್ಯ ಮಂತ್ರಿಯಾದ ಖ್ಯಾತಿ ಸುಚೇತಾ ಕೃಪಲಾನಿ ಅವರಿಗೆ ಸಲ್ಲುತ್ತದೆ.  ಅಂದಹಾಗೆ ಅವರು ಯಾವ ರಾಜ್ಯದ ಮುಖ್ಯಮಂತ್ರಿ ಆಗಿದ್ದರು?

A. ಮಧ್ಯಪ್ರದೇಶ
B. ಉತ್ತರಪ್ರದೇಶ●
C. ಬಿಹಾರ
D. ಹಿಮಾಚಲ ಪ್ರದೇಶ

7. ಮೀನಾಕ್ಷಿ ಮದನ್ ರೈ ಅವರು ಯಾವ ಹೈಕೋರ್ಟಿನ ಮೊದಲ ಮಹಿಳಾ ಮುಖ್ಯ ನ್ಯಾಯಮೂರ್ತಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ?

A. ಸಿಕ್ಕಿಂ ಹೈಕೋರ್ಟ್●
B. ಪಟ್ನಾ ಹೈಕೋರ್ಟ
C. ದೆಹಲಿ ಹೈಕೋರ್ಟ್
D. ಕೋಲ್ಕತಾ ಹೈಕೋರ್ಟ್

8. ಸಂಚಿ ಹೊನ್ನಮ್ಮ 'ಹದಿಬದೆಯ ಧರ್ಮ' ಎಂಬ ಕಾವ್ಯವನ್ನು ರಚಿಸಿದ್ದು ಕೆಳಕಂಡ ಯಾರ ಅವಧಿಯಲ್ಲಿ?

A. ಚಾಮರಾಜೇಂದ್ರ ಒಡೆಯರ್
B. ಚಿಕ್ಕ ದೇವರಾಜ ಒಡೆಯರ್●
C. ಕೃಷ್ಣರಾಜ ಒಡೆಯರ್
D. ಕಂಠೀರವ ನರಸಿಂಹರಾಜ್ ಒಡೆಯರ್

9. 'ಮಿಸೆಸ್ ಬಿ.ಡಿ.ಜಿ ಕೃಷ್ಣ' ಹೆಸರಿನಲ್ಲಿ ಅರಂಭದಲ್ಲಿ ಸಾಹಿತ್ಯ ರಚನೆ ಮಾಡಿದವರು ಯಾರು?

A. ತಿರುಮಲಾಂಬ
B. ಕೊಡಗಿನ ಗೌರಮ್ಮ●
C. ತ್ರಿವೇಣಿ
D. ಎಂ. ಕೆ. ಇಂದಿರಾ

10. 'ಮೈಲಾರಯ್ಯ - ಸರಸು' ಈ ಎರಡು ಯಾರ ಕಲ್ಪನೆಯ ಹೆಸರಾಂತ ಪಾತ್ರಗಳು?

A. ತ್ರಿವೇಣಿ
B. ಅನುಪಮಾ ನಿರಂಜನ
C. ಟಿ. ಸುನಂದಮ್ಮ●
D. ಡಾ. ಕಮಲಾ ಹಂಪನಾ

11. 'ಒಡಲಾಳ'ದ 'ಸಾಕವ್ವ'ನ ಪಾತ್ರಕ್ಕೆ ಜೀವ ತುಂಬಿದವರು ಯಾರು?

A. ಜಿ. ಜಯಶ್ರೀ
B. ಉಮಾಶ್ರೀ●
C. ಸುಂದರಶ್ರೀ
D. ಜಯಂತಿ

12. ಬೆಂಗಳೂರಿನ 'ಮಕ್ಕಳ ಕೂಟ' ದ ಸ್ಥಾಪನೆಗೆ ಕಾರಣರಾದವರು ಯಾರು?

A. ತಿರುಮಲೆ ರಾಜಮ್ಮ
B. ಆರ್. ಕಲ್ಯಾಣಮ್ಮ●
C. ಟಿ. ಸುನಂದಮ್ಮ
D. ಕೊಡಗಿನ ಗೌರಮ್ಮ

13. ಕೆಳಕಂಡ ಯಾವ ಮೂಲ ಹೆಸರಿನ ಲೇಖಕಿ 'ತ್ರಿವೇಣಿ' ಎಂಬ ಹೆಸರು ಇಟ್ಟುಕೊಂಡು ಪ್ರಖ್ಯಾತರಾದರು?

A. ಶೋಭನಾ
B. ಸುಮಲತಾ
C. ಅನಸೂಯ●
D. ಅನುರಾಧ

14. ಈ ಕೆಳಕಂಡವುಗಳಲ್ಲಿ ಎಂ.ಕೆ. ಇಂದಿರಾ ಅವರ ಮೊದಲ ಕಾದಂಬರಿ ಯಾವುದು?

A. ಗಜ್ಜೆ ಪೂಜೆ
B. ತುಂಗಭದ್ರ●
C. ಫಣಿಯಮ್ಮ
D. ಸದಾನಂದ

15. 'ಹಸಿಮಾಂಸ ಮತ್ತು ಹದ್ದುಗಳು' ಇದು ಯಾರ ಹೆಸರಾಂತ ಕಾದಂಬರಿಯಾಗಿದೆ?

A. ಬಿ.ಟಿ. ಲಲಿತಾ ನಾಯಕ್
B. ಬಿ.ಟಿ. ಜಾಹ್ನವಿ
C. ಸರಸ್ವತಿ ಚಿಮ್ಮಲಗಿ
D. ಗೀತಾ ನಾಗಭೂಷಣ●                
16. 'ಚಂದ್ರಗರಿಯ ತೀರದಲ್ಲಿ' ಇದು ಯಾರ ಪ್ರಸಿದ್ಧ ಕಾದಂಬರಿಯಾಗಿದೆ?

A. ವೈದೇಹಿ
B. ಬಾನು ಮುಷ್ತಾಕ್
C. ಸಾರಾ ಅಬೂಬಕರ್●
D. ಎಚ್.ಜಿ. ರಾಧಾದಾವಿ

17. 'ಭಾರತಿ' ಎಂಬ ಹೆಸರಿನಿಂದ ಕಾವ್ಯ, ನಾಟಕ, ವ್ಯಕ್ತಿಚಿತ್ರ ಬಲೆದವರು ಯಾರು?

A. ಬಿ.ಟಿ. ಲಲಿತಾ ನಾಯಕ
B. ತಿರುಮಲೆ ರಾಜಮ್ಮ●
C. ಟಿ. ಸುನಂದಮ್ಮ
D. ಕೊಡಗಿನ ಗೌರಮ್ಮ

18. ಈ ಕೆಳಕಂಡವುಗಳಲ್ಲಿ ಅನುಪಮಾ ನಿರಂಜನ ಅವರ ಕೊನೆಯ ಕಾದಂಬರಿ ಯಾವುದು?

A. ನಟಿ
B. ಮಾಧವಿ
C. ಋಣಮುಕ್ತಳು
D. ಮೂಲಮುಖಿ●

19. 2011ರ ಜನಸಂಖ್ಯೆ ಪ್ರಕಾರ ಕರ್ನಾಟಕದಲ್ಲಿ ಲಿಂಗಾನುಪಾತ ಎಷ್ಟಿದೆ?

A. 1,000ಕ್ಕೆ 923
B. 1,000ಕ್ಕೆ 963
C. 1,000ಕ್ಕೆ 973●
D. 1,000ಕ್ಕೆ 983

20. 2011ರ ಜನಸಂಖ್ಯೆ ಪ್ರಕಾರ,  ಗರಿಷ್ಟ 1094 ಹಾಗೂ ಅತಿ ಕನಿಷ್ಟ 916 ಲಿಂಗಾನುಪಾತ ಹೊಂದಿದ ಎರಡು ಜಿಲ್ಲೆಗಳು ಯಾವುವು?

A. ಉಡುಪಿ - ಹಾವೇರಿ
B. ಉಡುಪಿ - ಬೆಂ.ನಗರ ಜಿಲ್ಲೆ●
C. ಬೆಂಗಳೂರು ಗ್ರಾಮಾಂತರ - ಹಾವೇರಿ
D. ಬೆಂ.ನಗರ - ಉಡುಪಿ

21. 2011ರ ಜನಗಣತಿಯ ಪ್ರಕಾರ, ಕರ್ನಾಟಕದಲ್ಲಿ ಪುರುಷ ಸಾಕ್ಷರತೆ ಪ್ರಮಾಣ 82.47% ಇದ್ದರೆ, ಮಹಿಳಾ ಸಾಕ್ಷರತೆ ಪ್ರಮಾಣ ಎಷ್ಟಿದೆ?

A. 72.88%
B. 68.08%●
C. 66.88%
D. 64.08%

22. 'ಶಾಂತಲಾ' ಇದು ಯಾರ  ಹೆಸರಾಂತ ಕಾದಂಬರಿಯಾಗಿದೆ?

A. ಜಿ.ವಿ. ಅಯ್ಯರ್
B. ಕೆ.ವಿ. ಅಯ್ಯರ್●
C. ಭಾರತಿಸುತ
D. ದೇವುಡು

23. ನ್ಯಾಯಾಲಯದ ಆದೇಶದ ಪ್ರಕಾರ, ಮಹಿಳಾ ಮೀಸಲಾತಿ ಶೇ.50ನ್ನು  ಮೀರುವಂತಿಲ್ಲ. ಆದರೆ ಮಹಿಳೆಯರಿಗೆ ಶೇ. 68ರಷ್ಟು ಮೀಸಲಾತಿ ನೀಡಿದ ರಾಜ್ಯ ಯಾವುದು?

A. ಗುಜರಾತ್
B. ಮಧ್ಯಪ್ರದೇಶ
C. ರಾಜಸ್ಥಾನ●
D. ಬಿಹಾರ

24. ಕೆ.ಎಸ್. ನಾಗರತ್ನಮ್ಮ ಇವರು ಈ ಹಿಂದೆ ಯಾವ ಪ್ರಮುಖ ಹುದ್ದೆಯನ್ನು ಅಲಂಕರಿಸಿದ್ದರು?

A. ಅಡ್ವೋಕೇಟ್ ಜನರಲ್
B. ಮುಖ್ಯ ನ್ಯಾಯಮೂರ್ತಿ
C. ರಾಜ್ಯಪಾಲ
D. ಸಭಾಪತಿ●

25. ನಾಟ್ಯರಾಣಿ ಶಾಂತಲೆ ಕೆಳಕಂಡ ಯಾವ ಪ್ರಸಿದ್ಧ ಪ್ರವಾಸಿ ತಾಣದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಳು?

A. ಮಧುಗಿರಿ
B. ಶಿವಗಂಗೆ●
C. ನಂದಿಬೆಟ್ಟ
D. ಹಿಮವದ್ ಗೋಪಾಲಸ್ವಾಮಿ ಬೆಟ್ಟ

26. ಗಂಗೂಬಾಯಿ ಹಾನಗಲ್ ಅವರ ಹೆಸರಿನಲ್ಲಿ ಕೆಳಕಂಡ ಯಾವ ನಗರದಲ್ಲಿ ಸಂಗೀತ ವಿ.ವಿ. ಸ್ಥಾಪನೆ ಮಾಡಲಾಗಿದೆ?

A. ಧಾರವಾಡ
B. ವಿಜಯಪುರ
C. ಮೈಸೂರು●
D. ಬೆಳಗಾವಿ

27. ಅಕ್ಕಮಹಾದೇವಿಯ ಹುಟ್ಟೂರು ಉಡುತಡಿ ಕೆಳಕಂಡ ಯಾವ ತಾಲೂಕಿನಲ್ಲಿದೆ?

A. ಶಿಕಾರಿಪುರ●
B. ಶಿವಮೊಗ್ಗ
C. ಸಾಗರ
D. ಹೊಸನಗರ

28. 'ಭೂಮಿಗಾಥೆ' ಹೆಸರಿನಲ್ಲಿ 'ಜೀವನಾಡಿ' ಆರೋಗ್ಯ ಮಾಸಿಕದಲ್ಲಿ ಅಂಕಣ ಬರೆದವರು ಯಾರು?

A. ಡಾ. ಲೀಲಾವತಿ ದೇವದಾಸ್
B. ಡಾ. ಗಿರಿಜಮ್ಮ
C. ಡಾ. ವಸುಂಧರಾ ಭೂಪತಿ●
D. ಡಾ. ಅನುಪಮಾ ನಿರಂಜನ

29. ಕೆಳಕಂಡವು ನಾಲ್ಕೂ ಚಲನಚಿತ್ರಗಳಾದ ಕಾದಂಬರಿಗಳು. ಮೂರು ಒಬ್ಬರದ್ದೇ ಆಗಿದ್ದರೆ, ಒಂದು ಬೇರೆಯವರದ್ದಾಗಿದೆ. ಅದು ಯಾವುದು?

A. ಹಣ್ಣೆಲೆ ಚಿಗುರಿದಾಗ
B. ಬೆಳ್ಳಿಮೋಡ
C. ಫಣಿಯಮ್ಮ●
D. ಶರಪಂಜರ

30. 'ಹಬ್ಬ ಮತ್ತು ಬಲಿ' ಇದು ಯಾರ ಹೆಸರಾಂತ ಕಾದಂಬರಿ?

A. ಗೀತಾ ನಾಗಭೂಷಣ
B. ಸವಿತಾ ನಾಗಭೂಷಣ
C. ಮಾಲತಿ ಪಟ್ಟಣಶೆಟ್ಟಿ
D. ಬಿ.ಟಿ. ಲಲಿತಾ ನಾಯಕ್●

31. ಇನ್ಫೋಸಿಸ್ ಸಂಸ್ಥೆಯನ್ನು ತಮ್ಮ ಪತಿಯೊಂದಿಗೆ ಕಟ್ಟಿ ಬೆಳೆಸಿದ ಸುಧಾ ಮೂರ್ತಿ ಅದಕ್ಕೂ ಮುಂಚೆ ಕೆಳಕಂಡ ಯಾವ ಕಂಪನಿಯಲ್ಲಿ ಡೆವಲಪ್'ಮೆಂಟ್ ಎಂಜಿನಿಯರ್ ಆಗಿ ಕೆಲಸ ಮಾಡಿದ್ದರು?

A. ಬಜಾಜ್
B. ಟಾಟಾ- ಟೆಲ್ಕೊ ●
C. ರಿಲಯನ್ಸ್
D. ವಿಪ್ರೋ

32. 'ಅನುರಾಗ ಅರಳಿತು', 'ಸುವರ್ಣ ಸೇತುವೆ' ಸಿನಿಮಾ ಆದ ಈ ಕೃತಿಗಳನ್ನು ರಚಿಸಿದವರು ಯಾರು?

A. ಎಂ. ಕೆ. ಇಂದಿರಾ
B. ಮಂಗಳಾ ಸತ್ಯನ್
C. ಎಚ್.ಜಿ. ರಾಧಾದೇವಿ●
D. ತ್ರಿವೇಣಿ

33. "ಜಗವನಾಳುವ ತಾಯಿ ನನ್ನನಾಳುವ ಮಾಯೆ
ತಾನಾಗಿ ಬಂದಿಹಳು ನನ್ನ ಜಾಯೆ"
ಈ ಮೇಲ್ಕಂಡ ಸಾಲುಗಳು ಯಾರ ಕವಿತೆಯಲ್ಲಿ ಗೋಚರಿಸುತ್ತವೆ?

A. ಅಂಬಿಕಾತನಯ ದತ್ತ
B. ತೀನಂಶ್ರೀ
C. ಜಿಎಸ್ಸೆಸ್
D. ಕುವೆಂಪು●

34. "ನನ್ನವಳು ನನ್ನೆದೆಯ ಹೊನ್ನಾಡನಾಳುವಳು
ಬೆಳಗುಗೆನ್ನೆಯ ಚೆನ್ನೆ ನನ್ನ ಮಡದಿ"
ಈ ಪ್ರೀತಿಯ ಸಾಲುಗಳನ್ನು ಬರೆದವರು ಯಾರು?

A. ಬರಗೂರು ರಾಮಚಂದ್ರಪ್ಪ
B. ಕೆ.ಎಸ್ ನ●
C. ಡಾ. ಚಂದ್ರಶೇಖರ ಪಾಟೀಲ
D. ದೊಡ್ಡರಂಗೇಗೌಡ

35.  ಕರ್ನಾಟಕದ ಏಕೈಕ ಮಹಿಳಾ ವಿ.ವಿ. ಕೆಳಕಂಡ ಯಾವ ವರ್ಷ ಅಸ್ತಿತ್ವಕ್ಕೆ ಬಂದಿತು?

A. 2001
B. 2003●
C. 2005
D. 2007

ಮೇಲ್ಕಂಡ 35 ಪ್ರಶ್ನೆಗಳು ನಿಮಗೆ ಉಪಯುಕ್ತ ಎನಿಸಿದ್ದಲ್ಲಿ ಈ ಪೋಸ್ಟ್'ನ್ನು ಅವಶ್ಯವಾಗಿ Share ಮಾಡಿ.

No comments:

Post a Comment